ಭ್ರಾತೃ ಕವಿ

ಶ್ರೀಮಾನ್ ದ ರಾ ಬೇಂದ್ರೆಯವರಿಗೆ

ದೋಷರಾಹಿತ್ಯದಾ
ಕಲ್ಪನಾ ರಾಜ್ಯದೊಳು
ಸಗ್ಗದೂಟವನುಣುವ
ಹಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ
ಹಲವಾರು ದಿನಗಳಿಂ
ಇಣಿಕಿಣಿಕಿ ನೋಡುತಿದೆ
ಈ ಸಣ್ಣ ಮನವು

ಕವಿಯ ಬರೆಹವ ಕಂಡ
ರಸಬಿಂದುಗಳ ಸವಿಯೆ
ಸುಳಿಯುತಿದೆ ಭೃಂಗದೊಲು
ಭಾವವರಿಯದೆಯೆ

ಗುರಿಯ ನೆಟ್ಟಿಹ ತಾಣ
ದೊಗಟೆಯೊಡೆಯದೆ
ಅಣುವು ಧಾವಿಸಿದೆ
ದಿಕ್ಕು ತಪ್ಪಿ

ಕರೆಯದಾವುದೊ ಒಂದು
ಕೇಳುತಿದೆ ದೂರದೊಳು
ಬಾಳಿನೆಲೆಗಳ ನೆಗೆದು
ಬಾ ತಂಗಿಯೆಂದು

ಹರಿಯುತಿದೆ ಮಧುರಸದ
ಝರಿ ಎಲ್ಲೊ ಭೋರ್ಗರೆದು
ಬಳಿಸಾರಲಾಗದಾ
ಬಂಧನದ ಆಚೆ

ಮೇಳ ತಾಳದ ದಿವ್ಯ
ಝೇಂಕೃತದ ನಾದಗಳು
ಕೇಳಿ ಕೇಳಿಸದಾಗಿ
ಸಾಗುತಿಹುವು

ಭಾವಗಳ ಪರ್ವತದ
ಶ್ರೇಣಿಗಳ ಶಿಖರಗಳು
ಕಂಡು ಕಾಣಿಸದಾಗಿ
ಮೆರೆಯುತಿಹುವು

ಜಡ ಮನಕೆ ಚೇತನವ
ಕಲ್ಪಿಸುವ ಮಾನ್ಯ
ತೇಲಿಬಿಡು ಆ ನಿನ್ನ
ಭಾವಗಳನೊಮ್ಮೆ

ಆಳದೊಳು ಹೂಳಿರುವ ವಿಷಯಗಳ ಬಯಲಿಗಿಡು
ಮಾರ್ಗವಾವುದೊ ಕಂಡು ಮೆಲ್ಲನೆಯೆ
ಸಾಗುವಳು ಶಾಂತಿಯಿಂದೀ
ನಿನ್ನ ತಂಗಿ ಜನಕಜೆಯು
*****
೧೨-೦೧-೧೯೪೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಪಟ
Next post ಕಷ್ಟದ ಕೆಲಸ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys